
22nd October 2024
ಬಳ್ಳಾರಿ,ಅ.22:ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13 ರಂದು ಉಪ ಚುನಾವಣೆ ನಡೆಯಲಿದೆ. ಇನ್ನುಬಿಜೆಪಿ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ.ಸಂಡೂರು ಕ್ಷೇತ್ರಕ್ಕೆ ಬಂಗಾರು ಹನುಮಂತು ಅವರಿಗೆಟಿಕೆಟ್ ನೀಡಿದೆ.ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನಲೆ ಭಾರೀ ಸಿದ್ಧತೆ ನಡೆಯುತ್ತಿದೆ. ಪ್ರಚಾರಕಾರ್ಯಕ್ರಮ ಬಿರುಸಿನಿಂದ ನಡೆಯುತ್ತಿದೆ. ಈ ಸಂಬಂಧ ಏಳುಬೆಂಚಿ ಗ್ರಾಮದ ಪ್ರಚಾರದಲ್ಲಿ ಮಾಜಿ ಸಚಿವಜನಾರ್ಧನರೆಡ್ಡಿ ಮಾತನಾಡಿದ್ದಾರೆ. ಈ ವೇಳೆ ಅವರು ನೀಡಿದ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ.
ಕಾಂಗ್ರೆಸ್ ವಿನಾ ಕಾರಣ ಆರೋಪ
ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಜನಾರ್ಧನ ರೆಡ್ಡಿ ಅವರು,ನನ್ನನ್ನು ವಿನಾಕಾರಣ ಕಾಂಗ್ರೆಸ್ ನಾಯಕರು 4 ವರ್ಷಜೈಲಿಗೆ ಕಳುಹಿಸಿದರು.ಆದರೆ ನನಗೆ ಸಿಎಂ ಸಿದ್ದರಾಮಯ್ಯ ಬಗ್ಗೆ ಯಾವುದೇ ಸಿಟ್ಟು ಇಲ್ಲ.ಕೆಲ ಕಾಂಗ್ರೆಸ್ ನಾಯಕರುಸೋನಿಯಾಗಾಂಧಿಗೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದರು.ಈಗ ನಾನು 14 ವರ್ಷ ವನವಾಸ ಅನುಭವಿಸಿಬಂದಿದ್ದೇನೆ.ಆದರೆ ನಾನು ಮಾಡಿದ ಕರ್ಮವನ್ನು ನಾಣು ಅನುಭವಿಸಿದ್ದೇನೆ ಬಿಡಿ.ಇನ್ನು ಮುಂದಿನ ದಿನಗಳಲ್ಲಿ ಅವರುಮಾಡಿದ ಕರ್ಮವನ್ನು ಅವರೇ ಅನುಭವಿಸುತ್ತಾರೆ ಎಂದು ಅವರು ಗುಡುಗಿದ್ದಾರೆ.
ಸೋನಿಯಾಗಾಂಧಿ ಹೆಸರು ಪ್ರಸ್ತಾಪಿಸಿದ ರೆಡ್ಡಿ
ಸೋನಿಯಾ ಗಾಂಧಿ ಬಳ್ಳಾರಿಗೆ ನನ್ನನ್ನು ಹುಡುಕಿಕೊಂಡು ಬಂದಿದ್ದರು.ನಂತರ ಸೋನಿಯಾಗಾಂಧಿ ಗೆದ್ದ ಬಳಿಕರಾಜೀನಾಮೆ ಕೊಟ್ಟು ಹೋದರು.ಚುನಾವಣೆಯಲ್ಲಿ ಸೋತರೂ ಕೂಡ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬರುತ್ತಿದ್ದರು. ಇನ್ನುಸೋತ ಸಂಡೂರು ಕ್ಷೇತ್ರದಲ್ಲಿ ನಾವು ಕಾಂಗ್ರೆಸ್ಗೆ ಠೇವಣಿ ಇಲ್ಲದಂತೆ ಮಾಡಬೇಕು ಎಂದು ಕಾಂಗ್ರೆಸ್ ವಿರುದ್ಧ ರೆಡ್ಡಿಕಿಡಿಕಾರಿದರು.
ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಅಸಮಾಧಾನ
ಕಾಂಗ್ರೆಸ್ನಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಗ್ಯಾರೆಂಟಿಗಳಿಂದ ಜನರನ್ನ ಸೋಮಾರಿಗಳನ್ನಾಗಿ ಮಾಡಿದ್ದಾರೆ.ವಾಲ್ಮೀಕಿನಿಗಮದ ಹಣದಿಂದ ಈ ತುಕಾರಾಂ ಸಂಸದರಾಗಿದ್ದಾರೆ.ಇನ್ನು ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಜೈಲಿಗೆ ಹೋಗಿಬಂದಿದ್ದಾರೆ.ಈ ಪ್ರಕರಣದಲ್ಲಿ ತುಕಾರಾಂ ಜೈಲಿಗೆ ಹೋಗ್ತಾರೆ ಮತ್ತು ಸಂಸದ ಸ್ಥಾನ ಕಳೆದುಕೊಳ್ಳುವುದುಖಚಿತವಾಗಿದೆ.ನಿಮ್ಮ ಜನಾರ್ಧನರೆಡ್ಡಿ ಕೊಟ್ಟ ಮಾತು ಯಾವತ್ತೂ ಮರೆಯಲ್ಲ ನನ್ನ ಪ್ರಾಣ ಬಿಡ್ತೇನೆ ಹೊರತು ಮಾತುತಪ್ಪಲ್ಲ ಎಂದು ರೆಡ್ಡಿ ಭಾಷಣದಲ್ಲಿ ಹೇಳಿದ್ದಾರೆ.
ಸಂಡೂರು ವಿಧಾನಸಭೆಯಲ್ಲಿ 2 ಲಕ್ಷ ಮತದಾರರು
ಸಂಡೂರು ವಿಧಾನಸಭೆ ಉಪಚುನಾವಣೆಗೆ ಹೊರಡಿಸಿರುವ ವೇಳಾಪಟ್ಟಿಯಂತೆ ನಾಮಪತ್ರ ಸಲ್ಲಿಸಲು ಅ.25 ರಶುಕ್ರವಾರ ಕೊನೆಯ ದಿನವಾಗಿದ್ದು,ಅ.28ರ ಸೋಮವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.ಅ.30 ಬುಧವಾರನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು,ನ.13 ರ ಬುಧವಾರ ಮತದಾನ,ನ.23 ರ ಶನಿವಾರ ಮತಎಣಿಕೆ ಕಾರ್ಯ ನಡೆಯಲಿದ್ದು, ನ.25 ರ ಸೋಮವಾರದಂದು ಸಂಪೂರ್ಣ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಇನ್ನುಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,36,100 ಮತದಾರರಿದ್ದಾರೆ.ಅದರಲ್ಲಿ 1,17,789 ಪುರುಷಮತದಾರರು,1,18,282 ಮಹಿಳ ಮತದಾರರು ಹಾಗೂ 29 ಅಲ್ಪಸಂಖ್ಯಾತ ಲಿಂಗತ್ವ ಮತದಾರರು ಇದ್ದಾರೆ. ಒಟ್ಟು 253 ಮತಗಟ್ಟೆ ಮತಕೇಂದ್ರಗಳಿವೆ.
undefined
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ